ಕನ್ನಡ ಭಾಷೆಯ ವಿದ್ವಾಂಸರು, ಬರಹಗಾರ, ದ್ರಾವಿಡಾಲೊಜಿಸ್ಟ್ ಮತ್ತು ಭಾಷಾತಜ್ಞ. ದ್ರಾವಿಡ ಭಾಷಾ ವಿಜ್ಞಾನ ಹಾಗೂ ಕನ್ನಡ ಉಪ ಭಾಷೆಗಳ ಅಧ್ಯಯನ ಕ್ಷೇತ್ರದಲ್ಲಿ ಪ್ರೊ.ಕೆ. ಕುಶಾಲಪ್ಪ ಗೌಡರದು ಪ್ರಮುಖ ಹೆಸರು. ಆಧುನಿಕ ಭಾಷಾ ವಿಜ್ಞಾನ ಹಾಗೂ ಪರಂಪರಾಗತ ವ್ಯಾಕರಣಶಾಸ್ತ್ರದಲ್ಲಿ ಪಾಂಡಿತ್ಯ ಪಡೆದುಕೊಂಡಿರುವ ವಿದ್ವಾಂಸರು. === ಹುಟ್ಟು === ಕೋಡಿ ಕೃಷ್ಣಪ್ಪ ಮತ್ತು ಕೋಡಿ ಗೌರಮ್ಮ ದಂಪತಿಗಳ ಮಗನಾಗಿ 1931ರ ಮೇ 31ರಂದು ಕೊಡಗು ಜಿಲ್ಲೆಯ ಉತ್ತರ ಭಾಗದಲ್ಲಿರುವ ಪೆರಾಜೆಯ ಕೋಡಿ ಎಂಬಲ್ಲಿ ಜನನ. ಕೋಡಿ ಕುಶಾಲಪ್ಪಗೌಡ ಸುಳ್ಯ ತಾಲೂಕಿನ ಜಟ್ಟಿಪಳ್ಳದಲ್ಲಿ ನೆಲೆಸಿರುವ ಕುಶಾಲಪ್ಪ ಗೌಡ === ಶಿಕ್ಷಣ === ಸುಳ್ಯದ ಬೋರ್ಡ್ ಹೈಸ್ಕೂಲ್, ಪುತ್ತೂರು ಫಿಲೋಮಿನಾದಲ್ಲಿ ಹಾಗೂ ಮಡಿಕೇರಿಗಳಲ್ಲಿ ಆರಂಭಿಕ ಶಿಕ್ಷಣ. ಮದ್ರಾಸ್ ವಿಶ್ವವಿದ್ಯಾಲಯದ ಬಿಎ (ಆನರ್ಸ್), ಎಂಎ ಮತ್ತು ಅಣ್ಣಾಮಲೈ ವಿವಿಯಿಂದ ಭಾಷಾ ವಿಜ್ಞಾನ ಡಿಪ್ಲೊಮಾ, ಎಂ.ಲಿಟ್ ಮತ್ತು ಪಿಎಚ್‌ಡಿ ಪದವೀಧರ.೧೯೬೩ ರಲ್ಲಿ ಅವರು ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. === ವೃತ್ತಿ ಜೀವನ === ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಅಣ್ಣಾಮಲೈ ವಿವಿ ಭಾಷಾ ವಿಜ್ಞಾನ ಪ್ರೌಢ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. === ಪಿಎಚ್ ಡಿ ಮಹಾ ಪ್ರಬಂಧ === ಕ್ರಿ.ಶ.೧೦೦೦ ರಿಂದ ೧೪೦೦ ರವರೆಗಿನ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ, ಕೊಡಗು ಜಿಲ್ಲೆಗಳ ಕನ್ನಡ ಶಾಸನಗಳ ಭಾಷಿಕ ಅಧ್ಯಯನ. === ಭಾಷಾ ವಿಜ್ಞಾನ ಕೃತಿಗಳು === ಕನ್ನಡ ಭಾಷಾವಲೋಕನ.(೧೯೮೪) ಕನ್ನಡ ಭಾಷೆ ಮತ್ತು ವ್ಯಾಕರಣಗಳ: ಒಂದು ಅಧ್ಯಯನ.(೧೯೮೭) ಕನ್ನಡ ತಿರುಳು ಕನ್ನಡ ಮತ್ತು ಸಮಾಜ.(೧೯೯೧) ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಸಮೀಕ್ಷೆ.(೨೦೦೮) ಕನ್ನಡ ಸಂಕ್ಷಿಪ್ತ ವ್ಯಾಕರಣ.(೨೦೧೪) ವಡ್ಡಾರಾಧನೆಯ ಭಾಷಿಕ ಅಧ್ಯಯನ. .(೧೯೭೬) . . . === ಅನುವಾದ === ಗಂಗಾದೇವಿ ವಿರಚಿತ ಮಧುರಾವಿಜಯಂ ಕಂಬನ ಪವಿತ್ರಗಳು (ಜಯಸೆಂದಿಲ್ ನಾಥನ್ ಅವರೊಡನೆ) === ಸೃಜನಶೀಲ === ಊರೊಸಗೆ ಕಡಲ ತಡಿಯ ಕನವರಿಕೆ ಕಮಲ ನಿಮೀಲನ ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು. ಸಿಂಜಿನಿ == ಗೌರವಗಳು == ಸುಳ್ಯದಲ್ಲಿ ೧೯೯೪ರಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಮರಗೋಡಿನಲ್ಲಿ ೨೦೦೩ರಲ್ಲಿ ನಡೆದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. == ಪ್ರಶಸ್ತಿಗಳು == ಚಿದಾನಂದ ಪ್ರಶಸ್ತಿ . ಅರೆಭಾಷೆ ಅಕಾಡೆಮಿ ಪ್ರಶಸ್ತಿ. ಕೆವಿಜಿ ಪ್ರಶಸ್ತಿ. ಕನ್ನಡ ಭಾಷಾವಲೋಕನ ಕೃತಿಗೆ- ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮುಳಿಯ ಪ್ರಶಸ್ತಿ ಸೇಡಿಯಾಪು ಪ್ರಶಸ್ತಿ. ಸೋವಿಯತ್ ಲ್ಯಾಂಡ್ ಪ್ರಶಸ್ತಿ == ಉಲ್ಲೇಖ ==